ಪ್ರೀತಿ ಮತ್ತು ಸ್ನೇಹವೇ ತುಂಬಿದ ಬದುಕಿನಲ್ಲಿ ಕೊನೇ ವರೆಗೂ ಉಳಿಯುವುದು ಯಾವುದು? ಚಿರವಾಗಿ ಉಳಿಯುವುದು ಪ್ರೀತಿಯೋ ಅಥವಾ ಸ್ನೇಹವೋ ಎನ್ನುವುದು ಯಾವತ್ತಿಗೂ ಕಾಡುವ ಯಕ್ಷ ಪ್ರಶ್ನೆ. ಇಂಥ ಪ್ರಶ್ನೆಗೆ ಮನರಂಜನೆಯೊಂದಿಗೆ ಉತ್ತರ ನೀಡಲು ಹೊರಟಿರುವುದು ಮಾಯಾ ತೆರೆ ಕಂಬೈನ್ಸ್ ಚಿತ್ರ ‘ಚಿರವಾದ ನೆನಪು’
ಸ್ನೇಹದಲ್ಲಿ ಇದ್ದುಕೊಂಡು ಪ್ರೀತಿ ಬೆಲೆ ತಿಳಿಯದೆ ಇರುವ ಯುವ ಜನ ಈ ಚಿತ್ರದಿಂದ ಪ್ರೀತಿಗಿರುವ ಕಿಮ್ಮತ್ತನ್ನು ಅರಿಯಬಹುದು ಎಂಬುದು ನಿರ್ದೇಶಕ ವಿನ್ಸೆಂಟ್ ಅಂಥೋನಿ ಅವರ ಆಶಯ. ಪ್ರೀತಿ ಶಾಶ್ವತ ಎಂಬುದು ಅವರ ನಿಲುವು. ಜಿ ಸುರೇಶ್ ಹಾಗೂ ಮುತ್ಯಲ್ ಸಾಗರ್ ಅವರು ನಿರ್ಮಾಪಕರು. ಪ್ರವೀಣ್ ಓಲಿವರ್ ಅವರ ಸಂಗೀತದಲ್ಲಿ ಐದು ಹಾಡುಗಳು ಒಳಗೊಂಡಿದೆ. ಕಾರ್ತಿಕ್ ಅವರ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ಫಸ್ಟ್ ರ್ಯಾಂಕ್ ರಾಜು ಗುರುನಂದನ್ ಜೊತೆ ಶರಣ್ಯ, ಸ್ನೇಹಿತ್, ತಾನ್ಯ, ಜೈ ಜಗದೀಶ್, ಹರೀಶ್, ಸಂಗೀತ ತಾರಾಗಣದಲ್ಲಿ ಇದ್ದಾರೆ.